ಅಕ್ರಮ ಠೆವಣಿ ಸಂಗ್ರಹ ಆರೋಪ : ಶಿವಾನಂದ ನೀಲಣ್ಣನವರಗೆ ಜಾಮೀನು
ಬೆಳಗಾವಿ : ಶಿವಂ ಅಸೋಸಿಯೇಟ್ಸ್ ಸಂಸ್ಥೆಯಿಂದ ಕಾನೂನು ಬಸಹಿರವಾಗಿ ಕೋಟ್ಯಂತರ ರೂ. ಠೇವಣಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಬೆಂಗಳೂರಿನ 93 ನೇ ಸಿಟಿ ಸಿವಿಲ್ & ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ. 3 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಭಾರತ ಬಿಟ್ಟು ಹೋಗದಂತೆ ನ್ಯಾಯಾಲ ನೀಲಣ್ಣನವರಗೆ ಸೂಚನೆ ನೀಡಿದೆ.
ಶಿವಾನಂದ ನೀಲಣ್ಣವರ ಠೇವಣಿ ಸಂಗ್ರಹಿಸಿದ ಕುರಿತು ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಕೆಪಿಐಡಿ ಕಾನೂನು ನೀಲಣ್ಣವರ ಮೇಲೆ ಹದ್ದಿನ ಕಣ್ಣಿಡಲಿದೆ.
ನೀಲಣ್ಣನವರ ಮೇಲಿನ ಅಕ್ರಮ ಠೇವಣಿ ಹಣದ ತನಿಖೆ ಮುಗಿದಿಲ್ಲ. ನ್ಯಾಯಾಲಯ ನೀಲಣ್ಣವರಗೆ ಷರತ್ತು ಬದ್ಧ ಜಾಮೀನು ನೀಡಿದ್ದು ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದೆ.


