ಅಥಣಿ : ಗೃಹ ಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ಕಣ್ಣೆದುರಲ್ಲೇ ಆಪ್ತ ರಾವಸಾಬ ಬೇವನೂರ ಸಾವಣಪ್ಪಿದ್ದಾರೆ.
ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮದ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಹಾಲುಮತ ಸಮಾಜದ ತಾಲೂಕು ಅಧ್ಯಕ್ಷರಾಗಿದ್ದ ರಾವಸಾಬ ಬೇವನೂರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಲಕ್ಷ್ಮಣ ಸವದಿ ಹಾಗೂ ರಾವಸಾಬ ಬೇವನೂರ ಬಹುಕಾಲದ ಆಪ್ತರಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖದ ವಾತಾವರಣ ಮೂಡಿಸಿದೆ.
ಕಣ್ಣೆದುರಲ್ಲೇ ಆಪ್ತನ ಸಾವು ಕಂಡು ಕಣ್ಣೀರಾದ ಶಾಸಕ ಲಕ್ಷ್ಮಣ ಸವದಿ…! – Video


