ನಾವೇನು ಕಿಡ್ನ್ಯಾಪ್ ಮಾಡಲು ಹೇಳಿರಲ್ಲ ; ಸಾಹುಕಾರ್ ಸ್ಪಷ್ಟನೆ
ಬೆಳಗಾವಿ : ಉದ್ಯಮಿಯನ್ನು ಅಪಹರಿಸಿ ಐದು ಕೋಟಿ ರೂ. ಗೆ ಬೇಡಿಕೆ ಇಟ್ಟಿಟ್ಟ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಅರೆಸ್ಟ್ ಆಗಿದ್ದು, ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ನಮ್ಮ ಆಪ್ತರು ಇದ್ದರೆ ಇರಬಹುದು. ಇಲ್ಲ ಎಂದು ಹೇಳಲಾಗಲ್ಲ. ನಾವೇನು ಕಿಡ್ನ್ಯಾಪ್ ಮಾಡಲು ಹೇಳಿರುವುದಿಲ್ಲ. ಆವರ ವೈಯಕ್ತಿಕ ಸಮಸ್ಯೆ. ಈ ರೀತಿಯ ಸಮಸ್ಯೆ ಬಂದಾಗ ಪೋಟೋ ಹರಿದಾಡುತ್ತವೆ.
ಪ್ರತಿದಿನ ನೂರು ಜನ ಬಂದು ಪೋಟೋ ರಚಿಸುತ್ತಾರೆ. ಯಾರು ಎಂದು ನೋಡಲು ಆಗುವುದಿಲ್ಲ. ಈಗಾಗಲೇ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


