ಬೆಳಗಾವಿ : ಒಂದು ಕಡೆ ಮುಡಾ ಹಗರಣದ ಗೊಂದಲದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಸಿಲುಕಿರುವ ಮಧ್ಯೆ ಸೋಮವಾರ ಬೆಳಗಾವಿಗೆ ಸುದ್ದು ಆಗಮನ ಸಂಚಲನ ಮೂಡಿಸಿದೆ.

ಸೋಮವಾರ ಸಾಮ್ರಾ ವಿಮಾನ ನಿಲ್ದಾಣದಕ್ಕೆ ಬಂದಿಳಿಯಲಿರುವ ಸಿದ್ದರಾಮಯ್ಯ ಅವರು ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಕೋಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಗೋಕಾಕ್ ತಾಲೂಕಿನ ಕಳ್ಳಿಗುದ್ದಿ ಗ್ರಾಮಕ್ಕೆ ಸಿಎಂ ಆಗಮಿಸಲಿದ್ದು ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಹಾಗೂ ಮಾಲಾರ್ಪಣೆ ಮಾಡಲಿದ್ದಾರೆ. ಇನ್ನು ಇದೇ ದೀನ ಸಂಜೆ ಮೂಡಲಗಿ ತಾಲೂಕಿನ‌ ಯಾದವಾಡ ಗ್ರಾಮದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮಾಡಲಿದ್ದಾರೆ.