Select Page

Advertisement

ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ರೈತ ಸಾವು

ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ರೈತ ಸಾವು

ಬೆಳಗಾವಿ : ಜಮೀನಿನಲ್ಲಿ ರೈತ ಕೆಲಸ ಮಾಡುವ ವೇಳೆ ಹಾವು ಕಚ್ಚಿ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಬೆಳವಟ್ಟಿ‌ ಗ್ರಾಮದಲ್ಲಿ ಶನಿವಾರ ನಡೆದಿದೆ.

ರವೀಂದ್ರ ಕಾಂಬ್ಳೆ (38) ಹಾವು ಕಚ್ಚಿ ಮೃತಪಟ್ಟ ರೈತ. ಎಂದಿನಂತೆ ಇಂದು ಬೆಳಗ್ಗೆ ಜಮೀನಿಗೆ ಕೆಲಸಕ್ಕೆ ಹೋಗಿದ್ದ ರವೀಂದ್ರ ಗೆಣಸು ಹಚ್ಚುತ್ತಿದ್ದ, ಗೆಣಸಿನ ಬಳ್ಳಿ ಕೆಳಗೆ ಇದ್ದ ಹಾವು. ಬಳ್ಳಿ ಮೇಲೆತ್ತುವಾಗ ಎರಡು ಬಾರಿ ಕೈಗೆ ಕಚ್ಚಿದೆ.

ತಕ್ಷಣ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯದಲ್ಲಿ ರವೀಂದ್ರ ಮೃತಪಟ್ಟಿದ್ದಾನೆ. ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!