ಕಿರಣ ಮಾಳನ್ನವರಗೆ ವರ್ಷದ ಕನ್ನಡಿಗ ಪ್ರಶಸ್ತಿ
ಬೆಳಗಾವಿ : ಸದಾಕಾಲವೂ ಕನ್ನಡಕ್ಕಾಗಿ ಸಮಾಜಿಕ ಜಾಲತಾಣ ಸೇರಿದಂತೆ ಹತ್ತಾರು ವೇದಿಕೆಗಳ ಮೂಲಕ ಧ್ವನಿ ಎತ್ತುವ ಹಾಗೆಯೇ ಕರುನಾಡಿಗಾಗಿ ಸೇವೆ ಸಲ್ಲಿಸುವ ಕಿರಣ ಮಾಳನ್ನವರ ಅವರಿಗೆ ವರ್ಷದ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಳಗಾವಿ ನಗರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಆಯೋಜಿಸಿದ್ದ ಬೆಳಗಾವಿ ಉತ್ಸವ ಕಾರ್ಯಕ್ರಮದಲ್ಲಿ ಬೆಳಗಾವಿ ಕೆಎ ಪುಟದ ಸಂಸ್ಥಾಪಕ ಕಿರಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡದ ಖ್ಯಾತ ನಟರಾದ ಡಾಲಿ ಧನಂಜಯ, ವಶಿಷ್ಠ ಸಿಂಹ, ನೀನಾಸಂ ಸತೀಶ್, ನಟಿ ಸಪ್ತಮಿ ಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


