ಕಳ್ಳತನ ಪ್ರಕರಣ ; ಖುದ್ದು ಫೀಲ್ಡಿಗಿಳಿದ ಕಾಗವಾಡ ಲೇಡಿ ಪಿಎಸ್ಐ
ಕಾಗವಾಡ: ಬಸ್ ನಿಲ್ದಾಣ ಹಾಗೂ ಬಸ್ಗಳಲ್ಲಿ ಪ್ರಯಾಣ ಮಾಡುವ ವೇಳೆ ಕಳ್ಳತನ ಹಾಗೂ ವಂಚನೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಕಾಗವಾಡ ಪೊಲೀಸ್ ಠಾಣೆ ಪಿಎಸ್ಐ ಜಿ.ಜಿ. ಬಿರಾದರ ಜಾಗೃತಿ ಅಭಿಯಾನ ಕೈಗೊಂಡರು.
ಶನಿವಾರ ಪಟ್ಟಣದ ಬಸ್ ನಿಲ್ದಾಣದ ಮುಖಾಂತರ ಹಾದು ಹೋಗುವ ಎಲ್ಲ ಸರ್ಕಾರಿ ಬಸ್ಗಳಿಗೆ ಜಾಗೃತಿ ಕರಪತ್ರ ಅಂಟಿಸಿ, ಪ್ರಯಾಣದ ಸಮಯದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ನಡೆಯುವ ವಂಚನೆ ಹಾಗೂ ಕಳ್ಳತನದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು. ಬಸ್ಗಳಲ್ಲಿ ಪ್ರಯಾಣಿಸುವಾಗ ಅಪರಿಚಿತ ವ್ಯಕ್ತಿಗಳ ಕುರಿತು ಜಾಗೃತಿ ವಹಿಸಬೇಕು. ಕಳ್ಳರು ನಿಮಗೆ ಸಹಾಯ ಮಾಡುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಬಹುದು. ಬಸ್ ಹತ್ತುವಾಗ ಮತ್ತು ಇಳಿಯುವಾಗ ನಿಮ್ಮ ಬ್ಯಾಗ್ ಹಾಗೂ ಮಕ್ಕಳನ್ನು ಯಾರ ಬಳಿಯೂ ಕೊಡದೆ ಎಚ್ಚರ ವಹಿಸಿ ಎಂದರು.
ಈ ವೇಳೆ ಪೋಲಿಸ್ ಸಿಬ್ಬಂದಿಗಳಾದ ಸುರೇಶ ನಂದಿವಾಲೆ, ಸುಭಾಷ ದೇವಋಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


