ಹಾರೂಗೇರಿ : ಬೈಕ್ ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಯಬಾಗ ತಾಲೂಕಿನ‌ ಮುಗಳಖೋಡ ಗ್ರಾಮದ ಅಥಣಿ – ಗೋಕಾಕ್ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.

ಮುಗಳಖೋಡ ಗ್ರಾಮದ ಕರೇಪ್ಪಾ ಹಿಪ್ಪರಗಿ‌ ಮೃತಪಟ್ಟ ವ್ಯಕ್ತಿ . ಬೈಕ್ ಮೇಲೆ ತೆರಳುವ ವೇಳೆ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕರೇಪ್ಪಾ ಅವರನ್ನು ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಇವರಿಗೆ ಚಿಕಿತ್ಸೆ ಫಲಕಾರಿ‌ ಆಗದೆ ಮೃತಪಟ್ಟಿದ್ದಾರೆ. ಈ‌ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.