ತಂಗಿಯ ಜೊತೆ ಮಾತನಾಡಿದ್ದಕ್ಕೆ ಯುವಕನ ಹತ್ಯೆಗೈದ ಸಹೋದರ
ಬೆಳಗಾವಿ : ತನ್ನ ತಂಗಿಯ ಜೊತೆ ಯುವಕನೋರ್ವ ಮಾತನಾಡಿದ್ದಕ್ಕೆ ಸಂಶಯಗೊಂಡು ಬಾಲಕನೋರ್ವ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಎಣ್ಣಿ (23) ಕೊಲೆಯಾದ ದುರ್ದೈವಿ. ಈತ ಇದೇ ಗ್ರಾಮದ ಬಾಲಕಿ ಜೊತೆ ಮಾತನಾಡುತ್ತಿದ್ದ. ಈ ವೇಳೆ ನೋಡಿದ ಬಾಲಕಿ ಅಣ್ಣ ಮಂಜುನಾಥನನ್ನು ಕೊಲೆ ಮಾಡಿದ್ದಾನೆ.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

