ಘಟಪ್ರಭಾ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಗೋಕಾಕ್ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿರುವ ಘಟನೆ ಘಟಪ್ರಭಾದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ರೇಲ್ವೆ ಸ್ಟೇಷನ್ ನಿವಾಸಿ ಸಂಜಯ ಸಾಗರ ಕಾಂಬಳೆ (30) ಮೃತಪಟ್ಟ ಯುವಕ.
ಹಲವು ದಿನಗಳಿಂದ ಬುದ್ದಿ ಮಾಂದ್ಯದಂತೆ ವರ್ತಿಸುತಿದ್ದ ವ್ಯಕ್ತಿಯನ್ನು ತಡರಾತ್ರಿ ಗೋಕಾಕ್ ತಾಲೂಕಿನ ಘಟಪ್ರಭದ ಅನುರಾಧಾ ಬಾರ್ ಹತ್ತಿರ ಕೊಲೆ ಮಾಡಲಾಗಿದೆ.
ಘಟಪ್ರಭಾ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


