ಬೆಳಗಾವಿ : ಹಾವು ಕಚ್ಚಿದ ನಂತರ ಅದನ್ನು ಡಬ್ಬಕ್ಕೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಗ್ರಾಮದ ಶಾಹಿದ್ ಎಂಬ ಯುವಕನಿಗೆ ಹಾವು ಕಚ್ಚಿದೆ. ಮನೆಯಲ್ಲಿ ಬಂದ ಹಾವನ್ನು ಹಿಡಿದು ಊರ ಹೊರಗೆ ಬಿಡಲು ತೆರಳಿದ್ದಾನ. ಹಾವು ಬಿಡುವ ಸಂದರ್ಭದಲ್ಲಿ ಕಚ್ಚಿದ್ದು, ಅದನ್ನೇ ವಾಪಸ್ ಡಬ್ಬಿಗೆ ಹಾಕಿಕೊಂಡು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾನೆ.‌

ಇನ್ನೂ ಯುವಕ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಪರಿಣಾಮ ಸಿಬ್ಬಂದಿ ಹೌಹಾರಿದ್ದಾರೆ. ಆದರೆ ಯುವಕನ ಪ್ರಕಾರ, ಹಾವಿನ ತಳಿ ಹಾಗೂ ವಿಷದ ಪ್ರಮಾಣ ಎಷ್ಟು ದೇಹಕ್ಕೆ ಹೋಗಿದೆ ಎಂದು ತಿಳಿದಿರಲಿಲ್ಲ ಇದೇ ಕಾರಣಕ್ಕೆ ಹಾವಿನ ಜೊತೆ ಬಂದಿರುವೆ ಎಂದಿದ್ದಾನೆ.‌

ಇನ್ನೂ ಯುವಕನಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಆತ ಹಾವಿನೊಂದಿಗೆ ವಾಪಸ್ ತೆರಳಿದ್ದಾನೆ.