ಬೆಳಗಾವಿ : ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದ್ದು ಕೆಲವೇ ಕ್ಷಣಗಳಲ್ಲಿ ಎಲ್ಲಾ ಆರೋಪಿಗಳು ಪೊಲೀಸ್ ವಶದಲ್ಲಿ ರಲಿದ್ದಾರೆ.

ಈಗಾಗಲೇ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳ ಜಾಮೀನು ರದ್ದುಗೊಂಡಿದ್ದು ಎಲ್ಲರನ್ನೂ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ.

ಈ ಪ್ರಕರಣದ ಆರೋಪಿ ಪ್ರದೋಶ್ ಬೆಳಗಾವಿ ಹಿಂಡಲಗಾ ಜೈಲು ಸೇರುವ ಸಾಧ್ಯತೆ ಇದೆ. ಈ‌ ಹಿಂದೆ ಪ್ರದೋಶ್ ಹಿ‌ಂಡಲಗಾ ಜೈಲಿನಲ್ಲಿದ್ದರು. ಬಿಡುಗಡೆ ನಂತರ ಸಧ್ಯ ಜಾಮೀನು ರದ್ದಾದ ಕಾರಣ ಇವರು ಮತ್ತೆ ಮರಳಿ ಹಿಂಡಲಗಾ ಜೈಲು ಸೇರುವ ಸಾಧ್ಯತೆ ಇದೆ.