ಬೆಳಗಾವಿ : ಜಾತ್ರೆ ನಿಮಿತ್ತ ಎತ್ತಿನ ಬಂಡಿ ಓಡಿಸುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದ್ದು, ಯುವಕ ಮೃತಪಟ್ಟ ಘಟನೆ ನಗರದ ಬಸವನ ಕುಡಚಿಯಲ್ಲಿ ನಡೆದಿದೆ.
ಅಪ್ಪಣ್ಣ ಪಾರಿಸ ಪಾಟೀಲ (27) ಮೃತ ಯುವಕ. ಸೋಮವಾರ ಬಸವನ ಕುಡಚಿ ಜಾತ್ರೆ ನಿಮಿತ್ತ ಎತ್ತಿನ ಬಂಡಿ ಓಡಿಸುವ ಸಂದರ್ಭದಲ್ಲಿ ಯುವಕ ಆಯತಪ್ಪಿ ಚಕ್ರದ ಕೆಳಗೆ ಬಿದ್ದು ಸಾವಣಪ್ಪಿದ್ದಾನೆ.