
ಮೋದಗಾ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು

ಬೆಳಗಾವಿ : ತಾಲೂಕಿನ ಮೋದಗಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಬಿಜೆಪಿ ಮುಖಂಡರು ಭಾಗವಹಿಸಿ ದೇವಿ ಆಶಿರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಯುವರಾಜ ಜಾಧವ್, ಪ್ರಮುಖರಾದ ಧನಂಜಯ ಜಾಧವ್, ಚೇತನ ಅಂಗಡಿ, ಮನೋಜ ಪಾಟೀಲ, ಪ್ರಕಾಶ ದಾನೋಜಿ, ಓಮಪ್ಪ ಅಷ್ಟೇಕರ,
ಬಸವಣೆಪ್ಪ ಮುಗಳಿ, ರಾಹುಲ್ ಪಾಟೀಲ, ಯಲ್ಲಪ್ಪ ಅಷ್ಟೇಕರ, ಮಂಜುನಾಥ ಪಾಟೀಲ, ಸಾಗರ ಹಣಬರ, ಶ್ರೀಧರ ಚೌಗುಲಾ, ಅಪ್ಪಯ್ಯ ಪಾಟೀಲ, ಸಂತೋಷ್ ದೇಸನೂರ ವೀರಭದ್ರ ಪೂಜಾರಿ ದೇವಸ್ಥಾನದ ಕಮೀಟಿ ಸದಸ್ಯರು, ಕಾರ್ಯಕರ್ತರು ಹಾಗೂ ಮೋದಗಾ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.