
ಕಳ್ಳರ ಹೆಡೆಮುರಿ ಕಟ್ಟಿದ ನಗರ ಪೊಲೀಸರು

ಬೆಳಗಾವಿ : ಮನೆಗೆ ನುಗ್ಗಿ ಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ್ದ ಐನಾತಿ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ರಫೀಕ್ ಮಹಮ್ಮದ್ ಶೇಖ್, ಬೆಳಗಾವಿ ನಗರದ ಪ್ರಜ್ವಲ್ ಖಾನಜೆ ಎಂಬಾತನನ್ನು ನಗರದ ಉದ್ಯಮಬಾಗ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಹಾಗು ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಆರೋಪಿಗಳನ್ನು ಬಲೆಗೆ ಬೀಳಿಸಲು ತಂಡ ರಚಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹಾಗೂ ಉಪ ಪೊಲೀಸ್ ಆಯುಕ್ತೆ ಸ್ನೇಹ ಪಿ. ವಿ ಮತ್ತು ಹೆಚ್ ಶೇಖರಪ್ಪ ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ್ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಉದ್ಯಮಬಾಗ್ ಪೊಲೀಸ್ ಠಾಣೆಯ ಇನ್ಸಪೆಕ್ಟರ ಡಿ. ಕೆ ಪಾಟೀಲ್ ಮತ್ತು ಪಿ. ಎಸ್ ಐ ಕಿರಣ ಸಿ ಹೊನಕಟ್ಟಿ ನೇತೃತ್ವದ ತಂಡ ರಚಿಸಲಾಗಿತ್ತು.
ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ರಫೀಕ್ ಮಹಮ್ಮದ್ ಶೇಖ, ಹಾಗೂ ಸರಗಳ್ಳತನ 49/2023 ಕಲಂ 454, 457,380 ಐ. ಪಿ. ಸಿ 2)04/2024 ಕಲಂ 454,457,380 ಐ. ಪಿ. ಸಿ 3)41/2022 ಕಲಂ 392 ಐ. ಪಿ ಸಿ 4) 57/2022 ಕಲಂ 392 ಐ. ಪಿ ಸಿ 5) 70/2023 ಕಲಂ 392 ಐ ಪಿ. ಸಿ ಹೀಗೆ ಒಟ್ಟು 05 ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಈವರಿಂದ
ಉದ್ಯಮಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಸರಗಳ್ಳತನ ಮಾಡಿದ 10,76,900/- ರೂಪಾಯಿ ಕಿಮ್ಮತ್ತಿನ 148 ತೂಕದ ಬಂಗಾರದ ಆಭರಣಗಳನ್ನು ಹಾಗೂ 3,800/- ರೂಪಾಯಿ ಕಿಮ್ಮತ್ತಿನ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ದಿನಾಂಕ್ 10/07/2024 ಮತ್ತು 12/07/2024 ರಂದು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿ.ಎಸ್.ಐ ಶ್ರೀಮತಿ ಆರ್.ಪಿ.ಕದಮ , ಸಿ ಎಚ್ ಸಿ ಟಿ. ಬಿ ಕುಂಚನೂರ್, ಸಿಪಿಸಿಗಳಾದ ಭರಮಣ್ಣ ಕರೆಗಾರ್, ಜಗದೀಶ್ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ್ ಕರ್ಕಿ,ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ಅವರ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.