Select Page

Advertisement


ಅಥಣಿ : ಡಬಲ್ ಮರ್ಡರ್ ಹಿಂದಿದೆ ರೋಚಕ ಕಹಾನಿ, ಬಿಟ್ಟೊದ ಹೆಂಡ್ತಿ‌ನ ಬಿಡದ ಪಾಗಲ್ ಗಂಡ

<br />ಅಥಣಿ : ಡಬಲ್ ಮರ್ಡರ್ ಹಿಂದಿದೆ ರೋಚಕ ಕಹಾನಿ, ಬಿಟ್ಟೊದ ಹೆಂಡ್ತಿ‌ನ ಬಿಡದ ಪಾಗಲ್ ಗಂಡ

ಅಥಣಿ : ನಿನ್ನ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದ್ದ ಡಬಲ್ ಮರ್ಡರ್ ಹಿಂದೆ ರೋಚಕ ಕಥೆ ಅಡಗಿದ್ದು ತಿಳಿದುಬಂದಿದೆ. ಗಂಡ ಹಾಗೂ ಹೆಂಡತಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದ್ದು ಇದಕ್ಕೆಲ್ಲ ಹಿಂದಿನ ಪ್ರೇಮವೇ ಕಾರಣವಾಗಿದೆ.

ಮದುವೆಯಾಗಿದ್ದ ಪತ್ನಿ‌ ಕೈ ಕೊಟ್ಟಿದ್ದಕ್ಕೆ ಹೆಂಡತಿ ಹಾಗೂ ಆಕೆಯ ಪ್ರಿಯತಮನನ್ನು ಮಾಜಿ ಪತಿ ಕೊಚ್ಚಿ ಕೊಲೆ ಮಾಡಲಾಗಿದೆ. ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹೊರವಲಯದಲ್ಲಿ ನಡೆದ ಡಬಲ್ ಮರ್ಡರ್ ಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದೆ.  ಘಟನೆಯಲ್ಲಿ ಯಾಸಿನ ಬಾಗೊಡೆ (21) ಹೀನಾಕೌಸರ್  ಸುದಾರಾಣೆ (19) ಕೊಲೆಯಾದ ನವ ಜೋಡಿಗಳು. 

ಕೊಲೆಯನ್ನು ತಪ್ಪಿಸಲು ಅಮಿನಾಬಾಯಿ ಬಾಗೂಡ,  ಹಾಗೂ ಮುಸ್ತಫಾ ಮುಲ್ಲಾ ಮಧ್ಯೆ ಪ್ರವೇಶಿಸಿದಾಗ ಅವರು ಮೇಲು ಆರೋಪಿ ತೌಫಿಕ್ ಕ್ಯಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದು ಅವರನ್ನು ಮಹಾರಾಷ್ಟ್ರ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ : ಕಳೆದ 4 ತಿಂಗಳ ಹಿಂದೆ  ಹೀನಾಕೌಸರ ಹಾಗೂ ತೌಫಿಕ್ ಎಂಬ ಯುವಕನ ನಡುವೆ ಮದುವೆ ಆಗಿತ್ತು. ಅದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಯುವತಿ ಹೀನಾ ಇವಳು ಯಾಸೀನ್ ಎಂಬಾತನ ಜೋತೆ ಓಡಿ ಹೋಗಿದ್ದಳು. ಈ ಹಿಂದೆಯೇ ಇಬ್ಬರು ಪ್ರೀತಿಯಲ್ಲಿ ಇದ್ದರು ಯುವತಿ ಹೀನಾಕೌಸರ್ ಮೊದಲನೆ ಗಂಡ ತೌಫೀಕ್ ಗೆ ಹೇಳಿರಲಿಲ್ಲ.

ತೌಫಿಕ್ ನನ್ನು ಬಿಟ್ಟು ಹೋಗಿದ್ದ ಹೀನಾಕೌಸರ್ ಯಾಸಿನ್ ಜೊತೆ  ಪರಾರಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯನ್ನು ಆಗಿದ್ದಳು. ಇದೇ ಕೋಪದಲ್ಲಿದ್ದ ಯುವಕ ತೌಫಿಕ್ ಮೊದಲ ಪತ್ನಿ ಹೀನಾಕೌಸರ್ ಹಾಗೂ ಆತನ ಗಂಡ ಯಾಸೀನ್ ಇಬ್ಬರನ್ನು ಕತ್ತು ಸೀಳಿ‌ ಕೊಲೆ ಮಾಡಿದ್ದಾನೆ.‌ ತನಗೆ ಕೈ‌ ಕೊಟ್ಟವಳು ಬದುಕಬಾರದು ಹಾಗೆ ಆಕೆ ಸಂಸಾರವೂ ಇರಬಾರದು ಎಂದು ಈ ರೀತಿಯ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.

ಈ ಕುರಿತು ಅಥಣಿ ತಾಲೂಕಿನ ಐಗಿಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!