ಅಥಣಿ ಕಾಗವಾಡ ರಸ್ತೆಯಲ್ಲಿ ಭೀರಕ ಅಪಘಾತ ; ವ್ಯಕ್ತಿ ಸಾವು

ಅಥಣಿ : ವ್ಯಾನ್ ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವ್ಯಾನ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ದತ್ತಾತ್ರೇಯ ಖಾಂಡೆಕರ್ ಮೃತಪಟ್ಟ ವ್ಯಕ್ತಿ. ಸಾಂಗಲಿ ಜಿಲ್ಲೆಯ ಅಷ್ಟಾ ಗ್ರಾಮದ ವ್ಯಕ್ತಿ ತನ್ಮ ಒಮನಿ ವ್ಯಾನ್ ನಲ್ಲಿ ಅಥಣಿಯಿಂದ ಕಾಗವಾಡ ಕಡೆಗೆ ತೆರಳುವ ವೇಳೆ ಮಂಗಸೂಳಿ ಗ್ರಾಮದ ಬಳಿ ಗೂಡ್ಸ್ ವಾಹನ ಮಧ್ಯೆ ಅಪಘಾತ ಸಂಭವಿಸಿದೆ.
ಗೂಡ್ಸ್ ವಾಹನ ಚಲಕ ಪರಾರಿಯಾಗಿದ್ದಾನೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


