ಮಾಧ್ಯಮ ಲೋಕದ ದಿಗ್ಗಜ ಅಸ್ತಂಗತ
ಬೆಂಗಳೂರು : ಈನಾಡು ಪತ್ರಿಕೆ ಹಾಗೂ ಈಟಿವಿ ಮೂಲಕ ಮಾಧ್ಯಮ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ಚೆರುಕುರಿ ರಾಮೋಜಿರಾವ್ (88) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಮೋಜಿರಾವ್ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮಾಧ್ಯಮ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಾಧನೆಗೈದ ರಾಮೋಜಿರಾವ್ ಅವದರು ಅದ್ಬುತ ವ್ಯಕ್ತಿತ್ವ. ಕೃಷಿ ಕುಟುಂಬದಿಂದ ಬಂದ ಇವರು ತದನಂತರ ಬೃಹತ್ ಉದ್ಯಮದ ಮೂಲಕ ಲಕ್ಷಾಂತರ ಕೈಗಳಿಗೆ ಕೆಲಸ ನೀಡಿದರು.
1974 ರಲ್ಲಿ ಪ್ರಾರಂಭವಾದ ಈನಾಡು ಪತ್ರಿಕೆ ಕಡಿಮೆ ಅವಧಿಯಲ್ಲಿ ಬೆಳೆಯಿತು. ಇನ್ನೂ ರಾಮೋಜಿರಾವ್ ಫಿಲ್ಮ್ ಸಿಟಿ ಒಂದು ವಿಭಿನ್ನ ಜಗತ್ತಾಗಿಯೆ ಪರಿವರ್ತನೆ ಆಗಿ ನಿಂತಿದ್ದು ರಾಮೋಜಿರಾವ್ ಅವರ ಅವಿರತ ಪ್ರಯತ್ನದ ಫಲ.


