ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಇಬ್ಬರಲ್ಲಿ ಒಬ್ಬನ ಶವ ಪತ್ತೆ
ಮೂಡಲಗ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ-ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಘಟಪ್ರಭಾ ನದಿ ದಾಟುವಾಗ ಬೈಕ್ ಮೇಲಿಂದ ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದಿದ್ದರು.
ಅವರಾದಿ ಗ್ರಾಮದಿಂದ ಮಹಾಲಿಂಗಪುರಕ್ಕೆ ಕೆಲಸದ ನಿಮಿತ್ಯ ತೆರಳುವಾಗ ದುರ್ಗಮ್ಮ ಹರಿಜನ ಹಾಗೂ ಚನ್ನಪ್ಪ ಹರಿಜನ ಬೈಕ್ ಸಮೇತ ನದಿಗೆ ಬಿದ್ದಿದ್ದರು. ಮಂಗಳವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಚನ್ನಪ್ಪ ಹರಿಜನ ಮೃತದೇಹವನು ಡಿ ಆರ್ ಎಫ್ ತಂಡ ಪತ್ತೆ ಹಚ್ಚಿದೆ
ನದಿಯಲ್ಲಿ ಕಣ್ಮರೆಯಾಗಿದ್ದ ದುರ್ಗಮ್ಮ ಹರಿಜನಗಾಗಿ ಶೋಧಕಾರ್ಯ ಮುಂದುವರಿದಿದೆ.


