ಲಕ್ಷ್ಮೀ ಮೇಡಂ ನೀವು ಮತದಾನ ಮಾಡಿದ ಶಾಲೆ ಅಭಿವೃದ್ಧಿ ಆಗಲಿ – ನಮ್ಮ ಕಳಕಳಿ
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಯುವ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರಾದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಮ್ಮ ಕಳಕಳಿಯ ಮನವಿ.
ಕಳೆದ ಬುಧವಾರ ತಾವು 2023 ರ ವಿಧಾನಸಭಾ ಚುನಾವಣೆ ಹೆನ್ನೆಲೆ ಮತದಾನ ಮಾಡಿದ್ದೀರಿ. ಆದರೆ ತಾವು ಮತದಾನ ಮಾಡಿದ ಶಾಲೆಯ ಗೋಡೆ ಬಿರುಕು ಬಿಟ್ಟಿದೆ, ಜೊತೆಗೆ ಬಣ್ಣವನ್ನು ಕಂಡಿಲ್ಲ. ನೀವು ಶಾಸಕಿಯಾಗಿ ಆದರೂ ಈ ಸರ್ಕಾರಿ ಶಾಲೆ ಕಡೆಗಣಿಸದಿರಿ.

ನಿಮ್ಮಂತ ಪ್ರಜ್ಞಾವಂತ ರಾಜಕಾರಣಿಗಳು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ಕೊಡಬಹುದು. ಹಾಗೆಯೇ ತಾವು ಮತ ಚಲಾಯಿಸಿದ ಶಾಲೆಯನ್ನು ಆದಷ್ಟು ಬೇಗ ಸುಧಾರಿಸಿ. ಬರುವ ವರ್ಷದ ಶೈಕ್ಷಣಿಕ ವೇಳೆಗೆ ಮಕ್ಕಳಿಗೆ ಹಸ್ತಾಂತರ ಮಾಡಿದರೆ ಅದೇ ಸಂತೋಷ.
ಪ್ರತಿಯೊಬ್ಬರೂ ಸರ್ಕಾರಿ ಶಾಲೆ ಉಳಿವಿಗೆ ಹೋರಾಡಿ….! ಇದು ನಮ್ಮ ಕಳಕಳಿ ಮನವಿ.


