ತಾಯಿ ನೀರು ತರುವಷ್ಟರಲ್ಲಿ ಪ್ರಾಣಬಿಟ್ಟ ಮಗಳು
ಹಾಸನ : ಮಗಳಿಗೆ ಎದೆನೋವು ಕಾಣಿಸಿಕೊಂಡ ತಕ್ಷಣವೇ ನೀರು ತರುವಷ್ಟರಲ್ಲೇ ಮಗಳು ಹೃದಯಾಘಾತದಿಂದ ಮೃತಪಟ್ಟ ಘಡನೆ ಹಾಸನದ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ.
ಕವನ ಕೆ.ವಿ (21) ಮೃತ ಯುವತಿ. ಬಿ.ಕಾಂ ಓದುತ್ತಿದ್ದ ಯುವತಿ ಮೂರು ಪರೀಕ್ಷೆ ಬರೆದಿದ್ದಳು. ಮನೆಯಲ್ಲಿ ಕುಳಿತ ಸಂದರ್ಭದಲ್ಲಿ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು ತಾಯಿಗೆ ಕುಡಿಯಲು ನೀರು ಕೇಳಿದ್ದಾಳೆ.
ಇನ್ನೇನು ಮಗಳಿಗೆ ನೀರು ತಂದು ಕೊಡಬೇಕು ಎನ್ನುವಷ್ಟರಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಕೂಡಲೇ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಯುವತಿ ಸಾವಣಪ್ಪಿದ್ದಾಳೆ.


