ಗಡಿಯಲ್ಲಿ ನಿರಂತರ ಕ್ಷಿಪಣಿ ದಾಳಿ ನಡೆಸಿದ ಪಾಕ್ ; ರಕ್ಷಣಾ ಸಚಿವರಿಂದ ಮಹತ್ವದ ಸಭೆ
ಜಮ್ಮುಕಾಶ್ಮೀರ : ಭಾರತದ ಗಡಿಯಲ್ಲಿ ಪಾಕಿಸ್ತಾನ ನಿರಂತರ ದಾಳಿ ನಡೆಸುತ್ತಿದ್ದು, ಭಾರತೀಯ ಸೇನೆ ತಿರುಗೇಟು ನೀಡುತ್ತಿದೆ. ಈ ಮಧ್ಯೆ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ.
ಕಾಶ್ಮೀರ ವಾಯು ನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಿರಂತರ ಕ್ಷಿಪಣಿ ದಾಳಿ ನಡೆಸಿದ್ದು ಎಸ್ – 400 ಬಳಸಿ ಧ್ವಂಸ ಮಾಡಲಾಗಿದೆ. ಇನ್ನೂ ಕೆಲ ಕ್ಷಿಪಣಿಗಳು ಜಮ್ಮು ಕಾಶ್ಮೀರದ ಕೆಲ ಪ್ರದೇಶಗಲ್ಲಿ ಬಿದ್ದಿವೆ ಎಂದು ಹೇಳಲಾಗುತ್ತಿದೆ.
ಭಾರತ ಪ್ರತಿದಾಳಿ ನಡೆಸಿದ್ದು ಲಾಹೋರ್ ಹಾಗೂ ಸಿಯಾಲ್ ಕೋಟ್ ಮೇಲೆ ಡ್ರೋಣ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಆಫೀಸ್ ಸಯೀದ್ ಮನೆ ಮೇಲೆ ದಾಳಿ ಮಾಡಲಾಗಿದೆ.


