ಸಿ ಎಸ್ ತುಬಚಿ ಸಂಸ್ಥೆಯ ಸರ್ವ ಸಾಧಾರಣ ಸಭೆಯಲ್ಲಿ ಗಲಾಟೆ : ಪ್ರಕರಣ ದಾಖಲು
ಚಿಕ್ಕೋಡಿ: ಪಟ್ಟಣದ ಪ್ರತಿಷ್ಠಿತ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯ ಸರ್ವ ಸಾಧಾರಾಣ ಸಭೆಯಲ್ಲಿ ಹರಿತವಾದ ಆಯುಧದಿಂದ ಇರಿಯಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಇಂದು ನಡೆದ ಸರ್ವ ಸಾಧಾರಣ ಸಭೆಯಲ್ಲಿ ಹುಕ್ಕೇರಿಯ ಪ್ರತಿಷ್ಠಿತ ತುಬಚಿ ಕುಟುಂಬದ ಅಪುಶಾ ತುಬಚಿ ಮೇಲೆ ಚಾಕುವಿನಿಂದ ಇರಿಯಲಾಗಿದೆ ಎಂದು ದೂರು ದಾಖಲಾಗಿದೆ.
ಇಂದು ನಡೆದ ಸರ್ವ ಸಾಧಾರಣ ಸಭೆಯಲ್ಲಿ ಕಾನೂನು ಬಾಹಿರವಾಗಿ ಆಡಳಿತ ಮಂಡಳಿಯನ್ನ ಬದಲಿಸಲಾಗುತ್ತಿದೆ ಎಂದು ಅಪುಶಾ ತುಬಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಠರಾವ್ ಪುಸ್ತಕ ಕೇಳುವ ಸಂದರ್ಭದಲ್ಲಿ ಮಾತಿನ ಚಕಮಿಕಯಾಗಿ ಮಾರಮಾರಿಯಾದ ಸಂದರ್ಭದಲ್ಲಿ ರಾಜು ಮುಚ್ಚಂಡಿ ಹಾಗೂ ಟೋಚಾದಿಂದಿ ಇರಿಯಲಾಗಿದೆ ಎಂದು ಅಪುಶ ತುಬಚಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


