ಈದ್ ಮೆರವಣಿಗೆ : ತಲ್ವಾರ್ ನಿಂದ ಹೊಡೆದಾಡಿಕೊಂಡ ಯುವಕರು
ಬೆಳಗಾವಿ : ಈದ್ ಮಿಲಾದ್ ಮೆರವಣಿಗೆ ನಂತರ ಎರಡು ತಂಡಗಳ ನಡುವೆ ನಡುವೆ ಗಲಾಟೆ ನಡೆದಿದ್ದು ನಾಲ್ವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಉಜ್ವಲ ನಗರದ ಮಹಮ್ಮದ್ , ಸಾಹಿಲ್, ತನ್ವಿರ್ ಹಾಗೂ ಅಹಂ ಎಂಬುವವರ ಮೇಲೆ ಹಲ್ಲೆ ನಡೆದಿದ್ದು ಗಾಯಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಜ್ವಲ ನಗರ ಹಾಗೂ ರುಕ್ಮಿಣಿ ನಗರದ ತಂಡದ ನಡುವೆ ಗಲಾಟೆ ನಡೆದಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


