ಕಲಬುರಗಿ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಹತ್ತಿರದ ಕಾಗಿಣಾ ನದಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಿದ್ದ ಪರಿಣಾಮ ಚಾಲಕ ಬಾಹರಪೇಟ್ ನಿವಾಸಿ ನಿಂಗಪ್ಪ ಪೂಜಾರಿ ಮೃತಪಟ್ಟ‌ ಘಟನೆ ಭಾನುವಾರ ರಾತ್ರಿ ನಡೆದಿದೆ. ಸೇಡಂ ನಿಂದ ಚಿತ್ತಾಪುರಕ್ಕೆ ಬರುವಾಗ ಈ ದುರ್ಘಟನೆ ಜರುಗಿದೆ.

ಕಾರಿನಲ್ಲಿ ಇದ್ದ ಕೃಷ್ಣ ಸಂಗಪ್ಪ ಮತ್ತು ಉಮೇಶ್ ಬಸವರಾಜ ಅವರಿಗೆ ಗಾಯಗಳು ಆಗಿವೆ ಆದರೂ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಚೇತನ್ ಪೂಜಾರಿ ಭೇಟಿ ನೀಡಿದ್ದು ಈ ಕುರಿತು ಮಾಡಬಳ ಪೊಲೀಸ್ ಠಾಣೆಯ ವ್ಯಾಪ್ತಿಯಲಿ ಪ್ರಕರಣ ನಡೆದಿದೆ.