Select Page

ಆಸ್ತಿ ವಿಚಾರಕ್ಕೆ ಹೊಡೆದಾಟ ; ನಡುರಸ್ತೆಯಲ್ಲಿ ವ್ಯಕ್ತಿ ಹತ್ಯೆ

ಆಸ್ತಿ ವಿಚಾರಕ್ಕೆ ಹೊಡೆದಾಟ ; ನಡುರಸ್ತೆಯಲ್ಲಿ ವ್ಯಕ್ತಿ ಹತ್ಯೆ

ಚಿಕ್ಕೋಡಿ : ಜಮೀನಿನಲ್ಲಿ ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ‌ ಉಂಟಾಗಿದ್ದು ಓರ್ವನ ಕೊಲೆಯಲ್ಲಿ ಜಗಳ ಅಂತ್ಯವಾದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ತಾಲೂಕಿನ ಶಮನೇವಾಡಿ ಗ್ರಾಮದ‌ ಸುನೀಲ್ ಖೋತ್ (45) ಕೊಲೆಯಾದ ವ್ಯಕ್ತಿ. ಸದಲಗಾ ಪಟ್ಟಣದ ಹೊರವಲಯದ ನೇಜ – ಶಮನೇವಾಡಿ ರಸ್ತೆ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಣಪ್ಪಿದ್ದಾನೆ.

ಹಲವು ವರ್ಷಗಳಿಂದ ರಸ್ತೆ ವಿಚಾರವಾಗಿ ಕಲಹ ಇತ್ತು.
ಇಂದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು.
ಸಂಜೆ ರಾಜಿ ಪಂಚಾಯ್ತಿ ಮಾಡೋಣ ಎಂದು ಸಮಜಾಯಿಸಿ ನೀಡಿ ಪೊಲೀಸರು ಕಳುಹಿಸಿದ್ದರು.

ಸಂಜೆ ಮತ್ತೆ ಗಲಾಟೆ‌ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!