Select Page

Advertisement

ಅಥಣಿ : ಪಂಚಭೂತಗಳಲ್ಲಿ ಲೀನವಾದ ಯೋಧ ಕಿರಣರಾಜ್ ; ಕಂಬನಿ ಮಿಡಿದ ಗ್ರಾಮಸ್ಥರು

ಅಥಣಿ : ಪಂಚಭೂತಗಳಲ್ಲಿ ಲೀನವಾದ ಯೋಧ ಕಿರಣರಾಜ್ ; ಕಂಬನಿ ಮಿಡಿದ ಗ್ರಾಮಸ್ಥರು

ಅಥಣಿ : ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ಕಿರಣರಾಜ ಕೇದಾರಿ ತೆಲಸಂಗ (23)  ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಗುರುವಾರ ಸಂಜೆ ನೆರವೇರಿತು.

ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ  ಅಗ್ನಿವೀರ ಯೋಧ ಕಿರಣರಾಜ್ ಅವರು ಕಳೆದ ಮಂಗಳವಾರ  ಪಂಜಾಬ್ ಮಿಲಟರಿ ಯೂನಿಟ್ ನಲ್ಲಿ  ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು.

ಯೋಧನ ಮೃತದೇಹ ಗುರುವಾರ ಬೆಳಿಗ್ಗೆ ದೆಹಲಿಯಿಂದ ಬೆಳಗಾವಿಗೆ ಆಗಮಿಸಿತ್ತು.‌ ನಂತರ ರಸ್ತೆ ಮಾರ್ಗದ ಮೂಲಕ ಸೇನಾ ವಾಹನದಲ್ಲಿ ಅಥಣಿ ಮಾರ್ಗವಾಗಿ ಸ್ವಗ್ರಾಮ ಐಗಳಿ ಗ್ರಾಮಕ್ಕೆ ಮೆರವಣಿಗೆ ಸಾಗಿತ್ತು. ಇನ್ನೂ ಯೋಧನ ಮೃತದೇಹ. ನೋಡುತ್ತಿದ್ದಂತೆ ಕುಡುಂಬದ ಆಕ್ರಂದನ ‌ಮುಗಿಲು ಮುಟ್ಟಿತ್ತು.

ಮೃತ ಯೋಧನ ಸ್ವಗ್ರಾಮದ ಐಗಳಿ ಗ್ರಾಮದ ಹೊರವಲಯದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಂಜಾಬದ ಪಟಿಯಾಲ್ ರೆಜೀಮೆಂಟ್ ನಾಯಕ ಸುಭೇಧಾರ ಜಾಪರ್, ನಾಯಕ ಪ್ರದೀಪ್, ಹವಾಲ್ದಾರ್ ಚವ್ಹಾಣ, ನಾಯಕ

ಸುಭೇದಾರ ಸುರೇಶ  ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನ ಹೊಂದಿಸಿ  ಸೇನಾಧಿಕಾರಿಗಳಿಂದ  ಪುಷ್ಪ ನಮನ  ಸಲ್ಲಿಸಿ  ಶಸ್ತ್ರಾಸ್ತ್ರಗಳಿಂದ  5 ಸುತ್ತು  ಮದ್ದು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದರು.

ನಂತರ ರಾಷ್ಟ್ರಧ್ವಜವನ್ನು  ಸೇನಾಧಿಕಾರಿಗಳು  ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.



Advertisement

Leave a reply

Your email address will not be published. Required fields are marked *

error: Content is protected !!