Select Page

Advertisement

ಕೊನೆಗೂ 44 ಜನ ಕಾರ್ಯಕರ್ತರಿಗೆ ನಿಗಮ‌ ಮಂಡಳಿ ಸ್ಥಾನ ಹಂಚಿದ ಸಿದ್ದು ಸರ್ಕಾರ

ಕೊನೆಗೂ 44 ಜನ ಕಾರ್ಯಕರ್ತರಿಗೆ ನಿಗಮ‌ ಮಂಡಳಿ ಸ್ಥಾನ ಹಂಚಿದ ಸಿದ್ದು ಸರ್ಕಾರ

ಬೆಂಗಳೂರು : ಕಳೆದ ಕೆಲ‌ ದಿನಗಳ ಹಿಂದೆಯಷ್ಟೇ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ಹಿರಿಯ ಶಾಸಕರ ಆಕ್ರೋಶ ಕಡಿಮೆ ಮಾಡುವ ಕೆಲಸ ಮಾಡಿತ್ತು. ಸಧ್ಯ ಇದರ ಮುಂದುವರಿದ ಭಾಗವಾಗಿ ನಾಳೆ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ.

ಈಗಾಗಲೇ 44 ಜನರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿರುವ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದಿಸಿದ್ದಾರೆ. ನಾಳೆ ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಲಿದ್ದು ಆಯಾ ಸದಸ್ಯರಿಗೆ ವೈಯುಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.

ಅಷ್ಟೇ ಅಲ್ಲದೆ ಸರ್ಕಾರದ ಐತಿಹಾಸಿಕ ಐದು ಗ್ಯಾರಂಟಿ ಸ್ಕೀಂ ಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಿತಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದಿಸಿದ್ದಾರೆ.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಉಪಾಧ್ಯಕ್ಷರಾಗಿ ಮೆಹರೂಜ್ ಖಾನ್, ಪುಷ್ಪ ಅಮರನಾಥ್, ಎಸ್.ಆರ್.ಪಾಟೀಲ್ ಮತ್ತು ಸೂರಜ್ ಹೆಗ್ಡೆ ಅವರ ಹೆಸರನ್ನು ಮುಖ್ಯಮಂತ್ರಿಗಳು ಅನುಮೋದಿಸಿದ್ದಾರೆ.

Siddaramaiha D K Shivakumar Congress Nigama mandali H M Revanna S R Patil Pushpa Amaranath

Advertisement

Leave a reply

Your email address will not be published. Required fields are marked *

error: Content is protected !!