ಬೈಲಹೊಂಗಲ – ಈಜಲು ಹೋಗಿದ್ದ ಯುವಕ ನೀರುಪಾಲು
ಬೈಲಹೊಂಗಲ : ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವಕ ನೀರುಪಾಲಾದ ಘಟನೆ ತಾಲೂಕಿನ ಒಕ್ಕುಂದ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಂಗಳವಾರ ಇಬ್ಬರು ಸ್ನೇಹಿತರು ಮಲಪ್ರಭಾ ನದಿಗೆ ಈಜಲು ಹೋಗಿದ್ದಾರೆ ಈ ಸಂದರ್ಭದಲ್ಲಿ ಆಕಾಶ ಚಂದ್ರಪ್ಪ ಭದ್ರಶೆಟ್ಟಿ(18) ಯುವಕ ನೀರುಪಾಲಾಗಿದ್ದು ಈತನ ಶವವನ್ನು ಇಂದು ಪೊಲೀಸರು ಹೊರತಗೆದಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.


