ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಅವರು ಇತ್ತೀಚೆಗೆ ನಡೆದ ಅಹಿಂದ ವರ್ಗಗಳ ಸಮಾವೇಶದಿಂದ ದೂರ ಉಳಿದಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಂಘಟಕರು ತಮ್ಮನ್ನು ಈ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಿರಲಿಲ್ಲ ಎಂದು ಅವರು, ಮುಂಚಿತವಾಗಿ ಕರೆಯದೇ ಇರುವಾಗ ತಾವಾಗಿಯೇ ಅಲ್ಲಿಗೆ ತೆರಳುವುದು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
‘ಆಹಿಂದ’ ಚಳವಳಿ ಅಧವಾ ಕಲ್ಪನೆ ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ ಆಸ್ತಿಯಲ್ಲ ಎಂದು ಸತೀಶ್ ಜಾರಕಿಹೊಳಿ ನೇರವಾಗಿ ಹೇಳಿದ್ದಾರೆ. ಹಿಂದಿನಿಂದ ಸಮುದಾಯಗಳ ಹಿತದೃಷ್ಟಿಯಿಂದ ಇಂತಹ ಸಮಾವೇಶಗಳನ್ನು ಸಂಘಟಿಸಲು ಪ್ರತಿಯೊಬ್ಬರೂ ಸಂಪೂರ್ಣ ಹಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಈ ಸಮಾವೇಶದ ಬಗ್ಗೆ ಹೆಚ್ಚು ಚರ್ಚಿಸುವ ಹಾಗೆಯೇ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ತಮ್ಮನ್ನು ಕಾರ್ಯಕ್ರಮದಿಂದ ಹೊರಗಿಡಲು ಆಯೋಜಕರನ್ನೇ ಕಳಿ ಎಂದು ಉತ್ತರಿಸಿದ್ದಾರೆ.


