ಯಂತ್ರದಲ್ಲಿ ಸಿಲುಕಿದ ಕೈ ; ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ಅಥಣಿ : ದನಗಳಿಗೆ ಮೇವು ಕತ್ತರಿಸುವ ಯಂತ್ರದಲ್ಲಿ ಸಿಲುಕಿ ಯುವಕನ ಕೈ ತುಂಡಾಗಿದ್ದು ಆಸ್ಪತ್ರೆ ಖರ್ಚಿಗಾಗಿ ಬಡ ಕುಟುಂಬ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ವಿಠ್ಠಲ ತೇಲಿ ಎಂಬ ಯುವಕನ ಕೈ ಆಕಸ್ಮಿಕವಾಗಿ ಮೇವು ಕತ್ತರಿಸುವ ಯಂತ್ರದಲ್ಲಿ ಸಿಲುಕಿದೆ. ಈ ವೇಳೆ ಬಲಗೈ ತೀವ್ರವಾಗಿ ಗಾಯವಾಗಿದ್ದು ಸಧ್ಯ ಮಿರಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಯುವಕನ ವೈದ್ಯಕೀಯ ವೆಚ್ಚ ಲಕ್ಷಾಂತರ ರೂ ಆಗಿದ್ದು ಬಡ ರೈತ ಕುಟುಂಬ ಸಹಾಯದ ನಿರೀಕ್ಷೆಯಲ್ಲಿದೆ. ಹಣದ ಸಹಾಯ ಮಾಡಬಯಸುವವರು ಯುವಕನ ಬ್ಯಾಂಕ್ ಖಾತೆಗೆ ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7676801459 ಸಂಪರ್ಕಿಸಬಹುದು.
Name- Vittal Kasappa Teli
A/c No- 35128257646
IFSC- SBIN0015216
Branch -Saptasagar


