ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬಿಜೆಪಿ ಮುಖಂಡನ ಪುತ್ರ..!
ಹುಬ್ಬಳ್ಳಿ : ರೀಲ್ಸ್ ಹುಚ್ಚಿಗೆ ಬಿದ್ದು ಬಿಜೆಪಿ ಮುಖಂಡನ ಪುತ್ರ ಪ್ರಾಣ ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಮೀಷ್ ಸಂಗಳದ (15) ಮೃತ ಬಾಲಕ. ಮೈಸೂರಿನಲ್ಲಿ 9. ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಯುಗಾದಿ ಹಬ್ಬದ ಪ್ರಯುಕ್ತ ಮನೆಗೆ ಬಂದಿದ್ದ.
ಈ ವೇಳೆ ಗುರುವಾರ ಸಂಜೆ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಶೇಜವಾಡ್ಕರ್ ಪ್ಲಾಟ್ ಗೆ ತೆರಳಿದ್ದಾನೆ. ಪೋಷಕರ ಆಡಿ ಕಾರು ಬಳಸಿಕೊಂಡು ವೇಗವಾಗಿ ಬೈಕ್ ಓಡಿಸಿ ಸ್ಟಂಟ್ ಮಾಡುವ ವೇಳೆ ಬೈಕ್ ಗೆ ಕಾರು ಗುದ್ದಿದ್ದು ನಮೀಷ್ ಸಂಗಳದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಗನನ್ನು ಕಳೆದುಕೊಂಡ ವಿರೇಶ್ ಸಂಗಳದ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.


