ಜಮೀನಿನಲ್ಲಿ ಕೆಲಸ ಮಾಡುವಾಗ ಟ್ರ್ಯಾಕ್ಟರ್ ರೂಟರ್ ಗೆ ಸಿಲುಕಿ ವ್ಯಕ್ತಿ ಸಾವು
ಯರಗಟ್ಟಿ : ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಟ್ರ್ಯಾಕ್ಟರ್ ರೂಟರ್ ಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ತಾಲೂಕಿನ ಜೀವಾಪೂರ ಗ್ರಾಮದ ಜಾಲಿಕಟ್ಟಿ ಸಮೀಪದಲ್ಲಿ ನಡೆದಿದೆ.
ಫಕೀರಪ್ಪ ಟಪಾಲ (23) ಮೃತಪಟ್ಟ ಯುವಕ. ಗುರುವಾರ. ಬೆಳಿಗ್ಗೆ ಜಮೀನು ಉಳುಮೆ ಮಾಡುವ ವೇಳೆ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಮುರಗೋಡ ಪಿಎಸ್ಐ ಎಲ್. ಬಿ. ಮಾಳಿ ಹಾಗೂ ಎಎಸ್ಐ ವೈ. ಎಂ. ಕಡಕೋಳ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.


