ಯುದ್ಧ ಬೇಡ ಎಂದ ಸಿದ್ದರಾಮಯ್ಯರನ್ನು ಪಾಕಿಸ್ತಾನಕ್ಕೆ ಕಳಿಸುವುದು ಉತ್ತಮ ; ಶೆಟ್ಟರ್
ಬೆಳಗಾವಿ : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ 28 ಜನ ಹತ್ಯೆ ಮಾಡಿದ್ದಕ್ಕೆ ದೇಶದ ಜನರು ದುಃಖ ಪಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದ ಮಾಧ್ಯಮದಲ್ಲಿ ಹೊಗಳುತ್ತಿರುವುದು ದುರ್ದೈವದ ಸಂಗತಿ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷಗಳು ಕೇಂದ್ರ ಸರಕಾರದ ನಿಲುವಿನ ಬಗ್ಗೆ ಒಪ್ಪಿಗೆ ಇದೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮುರ್ಖತನದ ಹೇಳಿಕೆ ಹಿಂಪಡೆಯಬೇಕು. ದೇಶದಲ್ಲಿರುವ ಮಸ್ಲಿಮರ ಓಲೈಸುವ ಕೆಲಸ ಮಾಡುವ ಸಿದ್ಧರಾಮಯ್ಯ ಈಗ ಪಾಕಿಸ್ತಾನದ ಮುಸ್ಲಿಮರನ್ನು ಓಲೈಸಿ ಪಾಕಿಸ್ತಾನದ ಮಾಧ್ಯಮದಲ್ಲಿ ಅವರನ್ನು ಹೊಗಳುವ ಕೆಲಸ ಮಾಡುತ್ತಿದ್ದಾರೆ. ಇದು ಮುಸ್ಲಿಮರ ತುಷ್ಟಿಕರಣ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಯುದ್ಧ ಮಾಡುವುದು ಬೇಡಾ ಎಂದರೆ ಕರ್ನಾಟಕದಲ್ಲಿ ಅತ್ಯಾಚಾರ, ಕೊಲೆ, ದರೋಡೆ ರಾಜ್ಯದಲ್ಲಿ ನಡೆಯುತ್ತಿರುವುದು ಇವರ ಡೀಲಾತನದಿಂದ. ಆದ್ದರಿಂದ ಈ ರೀತಿಯ ಮುರ್ಖತನದ ಹೇಳಿಕೆಯನ್ನು ಸಿದ್ದರಾಮಯ್ಯ ವಾಪಸ್ಸು ಪಡೆಯಬೇಕು. ಇದರಿಂದ ಇಡೀ ಜನಾಂಗ ನಗೇಪಾಟಿಲು ಮಾಡುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ಪಾಕಿಸ್ತಾನದ ಟಿವಿಯಲ್ಲಿ ಪಾಪ್ಯುಲರ್ ಆಗುತ್ತಿದ್ದಾರೆ. ಯುದ್ಧ ಮಾಡುವುದು ಬೇಡ ಎಂದಿರುವ ಹೇಳಿಕೆ ಕೊಡುವುದನ್ನು ಬಿಟ್ಟು ಕೇಂದ್ರ ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ಕೊಡಿ ಇಲ್ಲದಿದ್ದರೆ ನಮಗೂ ತಕ್ಕ ಪಾಠ ಕಲಿಸುತ್ತಾರೆ ಜನರು ಎಂದರು.


