ಬೆಳಗಾವಿ : ಗಡಿ ಭಾಗದಲ್ಲಿ ಭಾಷಾ ಪುಂಡರ ಹಾವಳಿ ಹೆಚ್ಚಾಗಿದ್ದು, ಕಂಡಕ್ಟರ್ ಮೇಲಿನ ಹಲ್ಲೆ ಬೆನ್ನಲ್ಲೇ ಈಗ ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ ಖಾನಾಪುರ ಖಾನಾಪುರ ತಾಲೂಕಾ ಉಪಾಧ್ಯಕ್ಷ ಜಯವಂತ್ ಅಜ್ಜಪ್ಪ ನಿಡಗಲ್ಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.