ಐದು ಮಕ್ಕಳ ತಾಯಿಯನ್ನು ಕೊಚ್ಚಿ ಕೊಂದ ಕಿರಾತಕರು ; ನರಳಾಡಿ ಪ್ರಾಣ ಬಿಟ್ಟ ಬಾಣಂತಿ
ಬೆಳಗಾವಿ : ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಐದು ಜನ ಹೆಣ್ಣು ಮಕ್ಕಳ ತಾಯಿ, ಬಾಣಂತಿ ಹೆಣ್ಣುಮಗಳನ್ನು ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.
ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದ ಮಹಿಳೆ ಸುವರ್ಣ ಮಠಪತಿ ( 37 ) ಕೊಲೆಯಾದ ದುರ್ದೈವಿ. ಬಾಣಂತಿ ಮಹಿಳೆಯಯನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಅವರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.


