Select Page

Advertisement

ಡಿಸಿಸಿ ಅಖಾಡ ; ಜಾರಕಿಹೊಳಿ ಬಣದ ಮತ್ತೋರ್ವ ಸದಸ್ಯ ಅವಿರೋಧ ಆಯ್ಕೆ ಬಹುತೇಕ ಖಚಿತ…!

ಡಿಸಿಸಿ ಅಖಾಡ ; ಜಾರಕಿಹೊಳಿ ಬಣದ ಮತ್ತೋರ್ವ ಸದಸ್ಯ ಅವಿರೋಧ ಆಯ್ಕೆ ಬಹುತೇಕ ಖಚಿತ…!

ಬೆಳಗಾವಿ : ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣಾ ಅಖಾಡ ರಂಗು ಪಡೆದಿದ್ದು ಬಾಲಚಂದ್ರ ಜಾರಕಿಹೊಳಿ ಬಣದ ಮತ್ತೋರ್ವ ಅಭ್ಯರ್ಥಿ ಅವಿರೋಧ ಆಯ್ಕೆ ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಖಾನಾಪುರ ಕ್ಷೇತ್ರದಿಂದ ಡಿಸಿಸಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಅರವಿಂದ ಇವರ ವಿರುದ್ಧ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪರಶುರಾಮ ಪಾಟೀಲ ಹಾಗೂ ರಾಜಾರಾಮ ನಿದ್ದಾನಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವಲ್ಲಿ ಜಾರಕಿಹೊಳಿ ಬಣ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.‌

ನಾಮಪತ್ರ ವಾಪಸ್ ಪಡೆಯುಲು ಇಂದು ಸೋಮವಾರ ಕೊನೆಯ ದಿನವಾದ ಕಾರಣ ಚುನಾವಣಾ ಅಧಿಕಾರಿ ಸಂಜೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಅಕ್ಟೋಬರ್ 19 ಕ್ಕೆ ಉಳಿದ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Advertisement

Leave a reply

Your email address will not be published. Required fields are marked *

error: Content is protected !!