Select Page

Advertisement

ಕುರಿ ಮೇಯಿಸುತ್ತಿದ್ದ ಅಣ್ಣನ ಕೊಂದ ಕಿರಾತಕ ಅಂದರ್

ಕುರಿ ಮೇಯಿಸುತ್ತಿದ್ದ ಅಣ್ಣನ ಕೊಂದ ಕಿರಾತಕ ಅಂದರ್

ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಕುರಿ ಮೇಯಿಸಲು ಹೋಗಿದ್ದ ಸಹೋದರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪದಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಹಟ್ಟಿಆಲೂರು ಗ್ರಾಮದ ಬಸವರಾಜ ಕಮತಿ ( 24 ) ಬಂಧಿತ ಆರೋಪಿ. ಕಳೆದ ಮೇ.‌ 8 ರಂದು ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಬಳಿ ಜಮೀನಿನಲ್ಲಿ ರಾಯಪ್ಪ ಕಮತಿ ( 28 ) ಕುರಿ ಮೇಯಿಸಲು ಹೋಗಿದ್ದ. ಈ ಸಂದರ್ಭದಲ್ಲಿ ಆರೋಪಿ ಬಸವರಾಜ ಅಣ್ಣನ ಕಣ್ಣಿಗೆ ಕಾರದಪುಡಿ ಎರಚಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಯಾರಿಗೂ ತಿಳಿಯದಂತೆ ಸುಮ್ಮನಿದ್ದ.

ಮೃತ ರಾಯಪ್ಪ ತಂದೆ ಸುರೇಶ್ ಕಮತಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾದ ಕುರಿತು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ವಿವಿಧ ಸುಳಿವು ಆಧರಿಸಿ ಆರೋಪಿ ಬಸವರಾಜ ಕಮತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್, ಕುವೈತ್ ನ ಖಾಸಗಿ ಸಂಸ್ಥೆಯಲ್ಲಿ ಕೊಲೆ ಆರೋಪಿ ಬಸವರಾಜ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ಊರಿನಲ್ಲಿ ಬಂದು ವಾಸವಿದ್ದ. ಯಾವುದೇ ಕೆಲಸ ಮಾಡದ ಈತನ ಮೇಲೆ ಸಹೋದರ ರಾಯಪ್ಪ ಹಾಗೂ ದುಂಡಪ್ಪ ಸಿಟ್ಟಾಗಿದ್ದರು. ಕೆಲವು ಬಾರಿ ಜಗಳವೂ ನಡೆದಿತ್ತು.

ಮೇ.‌ 8 ರಂದು ಕುರಿ ಮೇಯಿಸಲು ಹೋಗಿದ್ದ ರಾಯಪ್ಪ ಅಲ್ಲೇ ಮೋಬೈಲ್ ನಲ್ಲಿ ರೀಲ್ಸ್ ನೋಡುತ್ತಾ ಕುಳಿತಿದ್ದ. ಇದೇ ಸಂದರ್ಭದಲ್ಲಿ ಆತನ ಸಹೋದರ ಬಸವರಾಜ ಕಮತಿ ಕಣ್ಣಿಗೆ ಕಾರದಪುಡಿ ಎರಚಿ‌ ಕೊಲೆ ಮಾಡಿದ್ದು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!