ಖಾನಾಪುರ : ವ್ಯಕ್ತಿ ಶವ ಪತ್ತೆ ; ಕೊಲೆ ಶಂಕೆ
ಬೆಳಗಾವಿ : ಚಿಕ್ಕದಿನಕೊಪ್ಪ ಶಾಲೆ ಹಿಂಬದಿ ವ್ಯಕ್ತಿ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಖಾನಾಪುರ ತಾಲೂಕಿನ ಚಿಕ್ಕದಿನಕೊಪ್ಪದ ಮಹಾವೀರ ಅನಿಗೊಳ ಮೃತ ವ್ಯಕ್ತಿ. ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಇಂದು ಮಧ್ಯಾಹ್ನ ಶವ ಪತ್ತೆಯಾಗಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದೇ ಗ್ರಾಮದ ಶಾಲೆ ಹಿಂಬದಿ ಮೃತದೇಹ ಪತ್ತೆಯಾಗಿದೆ.


